Search Blog

Sunday, August 19, 2012

ಅಂತರಾತ್ಮದ ಯೋಚನೆ - ಪ್ರೀತಿಯದೇ ಯಾತನೆ

 

ಬಿಟ್ಟು ಹೋದಳೆನ್ನ ಉಸಿರ ಒಳಗೆ ಬಸಿರು ಮಾಡಿಸಿ

ಕೊಟ್ಟೂ ಹೋದಳೊಂದು ತುತ್ತು ಮುತ್ತು ನೀಡುತ

ಮನದಾಳದಲ್ಲಿ ಬಿರುಗಾಳಿ, ಭಾವನೆಗಳಲ್ಲಿ ಪ್ರಳಯ

ಭಾಸವಾಯಿತೆನಗಿಂದು ಏಕೋ ಯಾತನೆಯ ತಳಮಳ

ಕಾಡಿ ಬೇಡಿ ಕರೆಯುವ ಪ್ರೀತಿ

ಕಾದ ಮನಸುಗಳಲ್ಲೇನೋ ಭೀತಿ

ಕನಸಲ್ಲೂ ಕಮರಿದಂತಾಗಿದೀ ದಿನ

ಕಣ್ಣೀರಿಟ್ಟರೂ ಕರುಣೆ ತೋರದೇ

ನೆರಳಂತೆ ಹಿಂಬಾಲಿಸಿ ಪ್ರೀತಿಸಿದ್ದ ಪ್ರೀತಿ

ಇದೇನು ನಿನ್ನ ನಡೆವಳಿಕೆ

ಪ್ರಶಾಂತ ಮನದಲ್ಲಿ ಪ್ರೀತಿಯ ಕಾವು ಹುಟ್ಟಿ

ಸುಪ್ತ ಮನಸೊಳಗೆ ಭೀತಿಯ ಛಾಪು ತಟ್ಟಿ

ಹೊರಟಿರುವೆಯೇನು ನನ್ನ ಬಿಟ್ಟು

ಇಲ್ಲದಿಹ ಭರವಸೆಯ ಕೊಟ್ಟು

ಬದುಕಲು ಪ್ರಯತ್ನಿಸುವೆ ನಿನ್ನ ಬಿಟ್ಟು

ಮೊಂಡು ಧೈರ್ಯದಿ ಪಣವ ತೊಟ್ಟ

ನಿನ್ನದಲ್ಲದ ಈ ಅಂತರಾತ್ಮ.

 

------------------------------------------------------------RJ ಪ್ರಭಾಕರ ಪ್ರಭು.