Search Blog

Monday, November 26, 2012

ಪರಿಸ್ಥಿತಿಯ ವ್ಯಭಿಚಾರ



ಮರೆತಿರುವೆ ನಾನೆಂದು
ಅರಿತಿರುವೆ ನೀನಿಂದು
ಹೃದಯದ ಗೂಡಲ್ಲಿ
ಬಚ್ಚಿಟ್ಟು ಪೂಜಿಸುವೆ
ಇರುಳೆಲ್ಲ ಕನವರಿಸಿ
ಭಾವನೆಗಳ ಕಸ ಗುಡಿಸಿ
ಮರುಳನಂತೆ ನುಡಿಸುರಿಸಿ
ತೋರಣವ ಕಟ್ಟಿರುವೆ
ಜೀವನದ ಬಾಗಿಲಿಗೆ
ನೀನಿರುವ ಜಾಗಕೆ
ನನ್ನ ಹೃದಯದ ಭಾಗಕೆ
ಕರೆದೊಯ್ಯಲು ಬರುವೆ
ಕಷ್ಟಗಳ ತೊರೆಯುವೆ
ಪಾಪಿ ನಾನೆಂದು
ಭಾವಿಸದಿರು ನೀನಿಂದು
ನಿನ್ನವನೇ ನಾನೆಂದೂ
ಮರೆಯದಿರು ಎಂದೆಂದೂ
ಬರಡಾಗಿದೆ ಭಾವನೆಗಳು
ಕಾದಿಹವು ಕನಸುಗಳು
ನಿನ್ನುಸಿರ ಸಿಂಚನಕೆ
ಮಧುರಾಮೃತ ಸೋಪಾನಕೆ
ಮೈನೆರೆವ ಸಾಂದರ್ಭಕೆ
ಬಿಗಿಯಪ್ಪುಗೆಯ ಸಲ್ಲಾಪಕೆ
ಕಾದಿಹವು ಕಣ್ಣುಗಳು
ನಿನ್ನೊಲವಿನ ಕುಡಿನೋಟಕೆ
ನಿಮಿರುತಿವೆ ಕರಣಗಳು
ನಲುಮೆಯ ಚೆನ್ನುಡಿಗೆ
ನನ್ನವಯವಗಳು ಕೇಳಲಾರವು
ನಿನ್ನದಲ್ಲದ ನನ್ನ ಮಾತ
ಪರಿತಪಿಸಿ ಬೇಡುತಿಹೆ
ಪರಿಸ್ಥಿತಿಯ ವ್ಯಭಿಚಾರಕೆ.


.................. RJ ಪ್ರಭಾಕರ ಪ್ರಭು.